
ಈದ್ಗಾ ಮೈದಾನಕ್ಕಾಗಿ ಚಾಮರಾಜಪೇಟೆ ಬಂದ್: ಅಂಗಡಿ-ಮುಂಗಟ್ಟು ಮುಚ್ಚಿ ಬಂದ್ ಗೆ ಸಾಥ್ ಕೊಟ್ಟ ಸಾರ್ವಜನಿಕರು
ಬೆಂಗಳೂರು: ಈದ್ಗಾ ಮೈದಾನಕ್ಕಾಗಿ ಚಾಮರಾಜಪೇಟೆ ಬಂದ್ ಮಾಡಲಾಗಿದ್ದು, ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟು ಮುಚ್ಚಿ ಸಾಥ್ ನೀಡಲಾಗಿದೆ. ಬಂದ್ಗೆ ಸಾರ್ವಜನಿಕರಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ. ಅಂಗಡಿ-ಮುಂಗಟ್ಟು ಮುಚ್ಚಿ ಸಾರ್ವಜನರಿಕರ ಸಾಥ್ ಕೊಟ್ಟಿದ್ದು, BBMPಗೆ ಚಾಮರಾಜಪೇಟೆ ಮೈದಾನ ಪಡೆದುಕೊಳ್ಳಲು ಆಗ್ರಹ ಮಾಡಲಾಗುತ್ತಿದೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟ ಬಂದ್ಗೆ ಕರೆ ನೀಡಿದೆ. ಸ್ವಯಂ ಪ್ರೇರಿತವಾಗಿ ಬಂದ್ಗೆ ಒಕ್ಕೂಟ ಕರೆ ಕೊಟ್ಟಿದೆ. ಬಂದ್ ಬೆಂಬಲದ ಬಿತ್ತಿ ಪತ್ರ ಹಾಕಿ ಜನರಿಂದ ಸ್ವಾಗತ ನೀಡಲಾಗಿದೆ. ಚಾಮರಾಜಪೇಟೆ ಮೈದಾನ BBMP ಸ್ವತ್ತಾಗಬೇಕು ಎಂದು ಒತ್ತಾಯ ಮಾಡಲಾಗುತ್ತಿದ್ದು, ಗಣೇಶ ಹಬ್ಬ, ಕನ್ನಡ ರಾಜ್ಯೋತ್ಸವಕ್ಕೂ ಸ್ಥಳ ಕೊಡಲು ಆಗ್ರಹ ಮಾಡಲಾಗಿದೆ.