
ಬೆಂಗಳೂರಿನಲ್ಲಿ ಸರಣಿ ರಸ್ತೆ ಅಪಘಾತ: ಒಂದು ಸಾವು, ಇಬ್ಬರಿಗೆ ಗಾಯ
ಬೆಂಗಳೂರು: ಜಕ್ಕೂರು ವಿಮಾನ ನಿಲ್ದಾಣದ ಬಳಿಯ ಕೆಐಎ ಎಕ್ಸ್ಪ್ರೆಸ್ ವೇನಲ್ಲಿ ಶುಕ್ರವಾರ ರಾತ್ರಿ ಒಂದು ಅಂಬ್ಯುಲೆನ್ಸ್, ಒಂದು ಕಾರು ಮತ್ತು ಒಂದು ಆಟೋ ರಿಕ್ಷಾ ಒಳಗೊಂಡ ಸರಣಿ ಅಪಘಾತವೊಂದರಲ್ಲಿ 32-ವರ್ಷ-ವಯಸ್ಸಿನ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಸಾವಿಗೀಡಾಗಿರುವುದು ತಡವಾಗಿ ವರದಿಯಾಗಿದೆ.
ಮೃತ ದುರ್ದೈವಿಯನ್ನು ಸಂಜೀವ ಕುಮಾರ ಎಂದು ಗುರುತಿಸಲಾಗಿದ್ದು, ಜಾರ್ಖಂಡ್ ಮೂಲದವರಾಗಿದ್ದ ಅವರು ಜಾಲಹಳ್ಳಿಗೆ ಸಮೀಪದ ಶೆಟ್ಟಿಹಳ್ಳಿಯಲ್ಲಿ ವಾಸವಾಗಿದ್ದರು. 52-ವರ್ಷ-ವಯಸ್ಸಿನ ಆಟೋ ರಿಕ್ಷಾ ಡ್ರೈವರ್ ಯಾರಬ್ ಮತ್ತು ಅಂಬ್ಯುಲೆನ್ಸ್ ಡ್ರೈವರ್ ರಮೇಶ್ ಗಾಯಗೊಂಡಿದ್ದಾರೆ.
ಇನ್ನೂ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಯಲಹಂಕದ ಸರ್ಕಾರೀ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಜೀವ ಅವರ ದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು.