
ಕಹಾ ಹೈ ಮೋದಿ- ಬೆಂಗಳೂರಿನಲ್ಲಿ ಮೋದಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಕೆಣಕಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಹಾ ಹೈ ಮೋದಿ ಎಂದು ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಎಸ್ ಸಿಪಿ, ಟಿಎಸ್ ಪಿ ಕಾಯ್ದೆ ಕಡ್ಡಾಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಿದ್ದರಾಮಯ್ಯ ,ಬಿಜೆಪಿ ಸರ್ಕಾರ ಎಸ್ ಸಿಪಿ ಟಿಎಸ್ ಪಿ ಕಾಯ್ದೆ ಪರ ಇದೆಯಾ ಎಂದು ಪ್ರಶ್ನಿಸಿದರು. ಕಹಾ ಹೈ ಮೋದಿ ? ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಮಾತನಾಡುತ್ತಾರೆ. ಆದರೆ ಅದು ಸಬ್ ಕಾ ಸಾತ್ ಸಬ್ ಕಾ ವಿನಾಶ್ ಎಂದು ಆರೋಪಿಸಿದರು. ನಮ್ಮ ಸಮಾಜ ಅಸಮಾನತೆ, ಆರ್ಥಿಕ ಅಸಮಾನತೆ ಇಂದ ಕೂಡಿದೆ.ಆರ್ಥಿಕ ಸ್ವಾಲಂಭನೆ ಇಲ್ಲದೇ ಸಮಾನತೆ ಬರೋದಿಲ್ಲ. ನಮ್ಮಲ್ಲಿ ಗುಲಾಮಗಿರಿ ಆಳವಾಗಿ ಬೇರೂರಿದೆ. ಮೇಲ್ಜಾತಿ ಬಡವನ ಕಂಡರೆ ಬುದ್ದಿ ಎನ್ನುತ್ತೇವೆ.ಅದೇ ಕೆಳಜಾತಿಯ ಶ್ರೀಮಂತ ವಿದ್ಯಾವಂತ ಸಿಕ್ಕರೂ ಮರ್ಯಾದೆ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.