
ಒಬ್ಬೇ ಒಬ್ಬ ಬಿಜೆಪಿ ನಾಯಕರು ಕೂಡ ಮೇಕೆದಾಟು ಆಗಬೇಕು ಅಂತ ಧ್ವನಿ ಎತ್ತಲೇ ಇಲ್ಲ: ಡಿಕೆ ಸುರೇಶ್
ಮೇಕೆದಾಟು ಯೋಜನೆ ಆಗಬೇಕು ಅಂತ ನಮ್ಮ ನೀರಿನ ಹಕ್ಕು ಉಳಿಸುವುದಕ್ಕೋಸ್ಕರ ಡಿಕೆಶಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಕೊವಿಡ್ ಕಾರಣದಿಂದ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಸರ್ಕಾರದ ನೀತಿ ನಿಯಮ ಕಾನೂನು ಪಾಲನೆ ದೃಷ್ಟಿಯಿಂದ ನಾವು ಮೊದಲ ಹೋರಾಟ ಮೊಟಕುಗೊಳಿಸಿದ್ದೆವು. ಸಿದ್ದರಾಮಯ್ಯ ಅವಧಿಯಲ್ಲಿ ಎಂಬಿ ಪಾಟೀಲ್ ನೀರಾವರಿ ಸಚಿವರಾಗಿದ್ದರು. ಮೂರು ಬಾರಿ ಡಿಪಿಆರ್ ರೆಡಿ ಮಾಡಿ ಸಲ್ಲಿಕೆ ಮಾಡಿದ್ದರು. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ ಒಬ್ಬೇ ಒಬ್ಬ ಬಿಜೆಪಿ ನಾಯಕರು ಕೂಡ ಮೇಕೆದಾಟು ಆಗಬೇಕು ಅಂತ ಧ್ವನಿ ಎತ್ತಲೇ ಇಲ್ಲ ಎಂದು ಎಂದು ಡಿ.ಕೆ. ಸುರೇಶ್ ತಿಳಿಸಿದ್ದಾರೆ.